
ಕಲ್ಲು ಬಂಡೆಗಳು ಎಂದರೆ ಜನರಿಗೆ ತಾತ್ಸಾರ.ಈ ಕಲ್ಲು ಬಂಡೆಗಳು ಇರವುದರಿಂದಲೇ ಭೂಮಿಯಲ್ಲಿ ನಮಗೆ ಬದುಕು ಇದೆ ಎಂದು ಮಾನವ ಪ್ರಾಣಿಗೆ ತಿಳಿದಿಲ್ಲ. ಪ್ರಾಣಿ ಪಕ್ಷಿ ,ಇತರ ಜೀವ ಜಂತುಗಳಿಗೆ ತಿಳಿಯುತ್ತಾ? ಒಂದು ವೇಳೆ ಭೂಮಿಯಲ್ಲಿ ಮಣ್ಣೇ ಇರುತ್ತಿದ್ದರೆ ಈ ನೆಲ ಭೂಮಿಯನ್ನು ಯಾವತ್ತೋ ಸಮುದ್ರ ರಾಜನು ತಾನು ಕಳೆದು ಕೊಂಡ ಭೂಮಿಯನ್ನು ತನ್ನ ವಿಶಾಲ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ಆರಾಮವಾಗಿ ಇರುತ್ತಿದ್ದ.ಅದನ್ನು ಕಳೆದು ಕೊಂಡ ಸಮುದ್ರವು ಆಗಿನಿಂದಲೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅಧಿಕಾರವನ್ನು ಚಲಾಯಿ ಸುತ್ತಾ ಇದ್ದಾನೆ.
ಒಂದು ಕಾಲದಲ್ಲಿ ನಾವು ಬದುಕುತ್ತಿರುವ ಈ ನೆಲ ಭೂಮಿಯು ಕೂಡಾ ಸಮುದ್ರದ ಒಳಗೆಯೇ ಇತ್ತು. ಸಮುದ್ರದ ಒಳಗೆ ಈಗಲೂ ಇರುವಂತೆ ಆಗಲೂ ಸಮುದ್ರದ ಒಳಗೆ ಬದುಕು ಇತ್ತು.ಸಮುದ್ರದ ಒಳಗಿನ ಕೆಲವು ಪ್ರದೇಶಗಳು ಬೆಳೆಯುತ್ತಾ ಸಮುದ್ರದ ಮಟ್ಟ ದಿಂದ ಮೇಲೆ ಬಂದು ಬೆಳೆಯುತ್ತಾ ಬಂತು.ಸಮುದ್ರವುಮೇಲೆ ಬಂದ ಪ್ರದೇಶವನ್ನು ತನ್ನ ಬಲವಾದ ಅಲೆ ತೆರೆ ಗಳಿಂದ ಕಸಿಯಲು ಪ್ರಯತ್ನ ಮಾಡುತ್ತಲೇ ಇದೆ.ಆದರೆ ಪ್ರಯತ್ನ ಫಲಿಸಲಿಲ್ಲ. ಏಕೆಂದರೆ ಮೇಲೆ ಮೇಲೆ ಬೆಳೆಯುತ್ತಿರುವ ಈ ನೆಲ ಭೂಮಿಯು ಗಟ್ಟಿಯಾದ ವಿವಿಧ ಕಲ್ಲು ಬಂಡೆ, ವಿವಿಧ ಖನಿಜಗಳಿಂದ ನಿರ್ಮಾಣ ಗೊಂಡು ವೇಗವಾಗಿ ಬೆಳೆಯುತ್ತಲೇ ಇದೆ.ಈಗಿರುವ ನೆಲ ಭೂಮಿಯಲ್ಲಿನ ಎಲ್ಲಾ ಜೀವ ಜಂತುಗಳು ಅಂದು ಸಮುದ್ರದ ಒಳಗಿನಿಂದ ಮೇಲೆ ಬಂದು ವಿಕಾಸ ಹೊಂದಿರುವ ಜೀವಿಗಳು.
ಕಲ್ಲನ್ನು ತಾತ್ಸಾರ ಮಾಡಬಾರದು.ದೂಷಿಸಬಾರದು. ಕಲ್ಲುಗಳು ನಮ್ಮನ್ನು ಬರೇ ಸಮುದ್ರದ ನೀರಿನಿಂದ ರಕ್ಷಿ ಸುವುದಲ್ಲದೆ ಸೂರ್ಯನ ಉರಿ ಬಿಸಿಲಿನಿಂದ ರಕ್ಷಿಸಿ ನಮ್ಮನ್ನು ಬದುಕುವಂತೆ ಮಾಡುತ್ತದೆ.ನೆಲ ಭೂಮಿ ಯಲ್ಲಿ ಈ ಕಲ್ಲು ಬಂಡೆಗಳು ಸೂರ್ಯನ ಉರಿ ಶಾಖ ವನ್ನು ಎಳೆದು ಹೀರಿ ನೆಲದಡಿಯಲ್ಲಿರುವ ಸಮುದ್ರಕ್ಕೆಕಳುಹಿಸಿ ತಣಿಸುತ್ತದೆ.ಈ ಕಲ್ಲು ಬಂಡೆ ಖನಿಜಗಳು ಈ ನೆಲ ಭೂಮಿಯಲ್ಲಿ ಇರದೆ ಇರುತ್ತಿದ್ದರೆ ಯಾವತ್ತೋ ಇದು ಸುಟ್ಟು ಇತರ ಗ್ರಹಗಳಂತೆ ಇರುತ್ತಿತ್ತು.ಬರೇ ಉರಿ ಬಿಸಿಲ ಶಾಖದಿಂದ ಅಲ್ಲದೆ ಕಲ್ಲು ಬಂಡೆಗಳು ಸಿಡಿಲು ಮಿಂಚುಗಳಿಂದ ನೆಲ ಭೂಮಿಯಲ್ಲಿ ಬದುಕುವ ಎಲ್ಲಾ ಜೀವ ಜಂತು,ಗಿಡ ಮರಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ.ಮಿಂಚು ಸಿಡಿಲುಗಳನ್ನು ವೇಗವಾಗಿ ಆಕರ್ಷಿಸಿ ಎಳೆದು ಭೂಮಿಯ ಒಳಗೆ ಕಳುಹಿಸುವ ಕೆಲಸ ಮಾಡುತ್ತದೆ.ಸಮುದ್ರದ ಒಳಗಿನ ಕಲ್ಲು ಬಂಡೆಪರ್ವತಗಳೂ ಈ ಕೆಲಸವನ್ನು ಮಾಡುತ್ತವೆ.
ವಿಜ್ಞಾನಿಗಳು ಹೇಳುವ ಪ್ರಕಾರ ಒಟ್ಟು ಭೂಮಿಯ 71 ಭಾಗವು ಜಲ ಭೂಮಿ ಆಗಿದೆ.ಉಳಿದ 29 ಭಾಗವುನೆಲ ಭೂಮಿ ಆಗಿದೆ.ನೆಲ ಭೂಮಿಯ ಆಳದಲ್ಲಿ ಕಡಲುಹರಡಿದೆ.ಕಡಲ ನೀರಿಗೆ ಮೇಲ್ಮುಖವಾಗಿ ಒತ್ತಡ ಇದೆ.ಆದ್ದರಿಂದಲೇ ಬಾವಿ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮಿ ಮೇಲೆ ಬರುತ್ತದೆ.ಮಣ್ಣು ಉಪ್ಪು ನೀರನ್ನು ಸೋಸಿ ಸಿಹಿ ನೀರನ್ನು ಕೊಡುತ್ತದೆ.ಮರುಭೂಮಿಯ ಲ್ಲೂ ಕೊಳವೆ ಬಾವಿಯಿಂದ ನೀರು ಸಿಗುತ್ತದೆ.
ಭೂಮಿಯಲ್ಲಿ ಮಣ್ಣು ಇದ್ದರೂ 10 ಭಾಗ ಇರಬಹು ದು.ಉಳಿದ 90 ಭಾಗವು ಕಲ್ಲು ಬಂಡೆ,ವಿವಿಧ ಖನಿಜ ಗಳಿಂದ ನಿರ್ಮಾಣಗೊಂಡಿದೆ.ಬದುಕು ಸಾಗಿಸಲು ಬೆಳೆಬೆಳೆಸಿ ಜೀವಿಸಲು ಪ್ರಕೃತಿ ಎಂಬ ಭೂಮಿಯಲ್ಲಿ ಮಣ್ಣುಇದೆ.ಮನೆ ಕಟ್ಟಲು ಕಲ್ಲು ಒಡನೆ ಮಣ್ಣು ಬೇಕು.ಮನೆಯಂತೆ ನೆಲ ಭೂಮಿಯ ನಿರ್ಮಾಣ ಆಗಿದೆ.ಮನೆ ನಿರ್ಮಾಣ ಮಾಡಲು ಕಲ್ಲುಗಳಿಂದಲೇ ಪಂಚಾಂಗದ ರಚನೆ ಮಾಡಿದಂತೆ ಭೂಮಿಯ ನಿರ್ಮಾಣದ ಪಂಚಾಂಗವೂ ಕಲ್ಲುಗಳಿಂದಲೇ ಪ್ರಕೃತಿಯು ರಚಿಸಿದೆ.
ಭೂಮಿಯ ಮೇಲೆ ವಿಶ್ವದಾದ್ಯಂತ ಮಾನವ ನಡೆಸು ವ ನಿರಂತರ ಅತ್ಯಾಚಾರದಿಂದಾಗಿ ಭೂಮಿಯ ಸಮ ತೋಲನ ತಪ್ಪಿ ಹೋಗುತ್ತದೆ.ಭೂಮಿಯ ಪಂಚಾಂಗದ ಕಲ್ಲುಗಳು ಜಾರುತ್ತದೆ.ಇದರಿಂದ ಪರ್ವತಗಳು ಕುಸಿದುಬೀಳುತ್ತದೆ.ಭೂಮಿ ಕಂಪಿಸಿ ತಂತಾನೆ ಸಮತೋಲನವನ್ನು ಕಾಪಾಡುವಾಗ ಸರಿಪಡಿಸುವ ಹೊತ್ತಿಗೆ ಭೂಕಂಪ ದ ಅನುಭವ ಆಗುತ್ತದೆ.ಈ ರೀತಿಯ ಭೂಕಂಪ ಸಂಭ ವಿಸಲು ಸಮುದ್ರವು ಕಾಯುತ್ತಾ ಇರುತ್ತದೆ.ಗುಡ್ಡ ಪರ್ವತಗಳು ಕುಸಿಯಲು ಮಾನವನು ಎಸಗುವ ಕೃತ್ಯದೊಡನೆ ಕಡಲು ಕೂಡಾ ಸಮುದ್ರದ ಒಳಗಿನಿಂದ ತನ್ನ ಬಲವಾದ ಅಲೆಗಳಿಂದ ಅವುಗಳನ್ನು ಕೆಡಹುವಂತೆ ಕುಸಿಯುವಂತೆ ಮಾಡುತ್ತದೆ.ಒಟ್ಟಿನಲ್ಲಿ ಸಮುದ್ರವು ತಾನುಕಳೆದುಕೊಂಡ ನೆಲ ಭೂಮಿಯನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿ ಕೊಳ್ಳುವವರೆಗೆ ಶ್ರಮಿಸುತ್ತಲೇ ಇರುತ್ತದೆ.ಪ್ರಲಯ,ಸುಂಟರಗಾಳಿ,ಚಂಡಮಾರುತ, ಭೂಕಂಪ ಇತ್ಯಾದಿಗಳನ್ನು ಸೃಷ್ಟಿಸಿ ನೆಲ ಭೂಮಿಯನ್ನು ಕಡಲಿಗೆ ವಿಲೀನ ಗೊಳಿಸಲು ಕಾಯುತ್ತಾ ಇದೆ.
ಎತ್ತರದ ಕಲ್ಲು ಬಂಡೆಗಳು,ಗುಡ್ಡ ಪರ್ವತಗಳು ನೆಲಭೂಮಿ ನಿರ್ಮಾಣದಲ್ಲಿ ನಿರ್ಮಿತ ಪಿಲ್ಲರ್ ಕಂಬಗಳಂತೆ.ಈ ಕಂಬಗಳ ಅಡಿಯಲ್ಲಿದೆ ಕಲ್ಲುಗಳೆಂಬ ಸರಳುಐರನ್ ರಾಡ್ ಗಳು.ಈ ರಾಡ್ ಗಳು ನೆಲದಡಿಯಲ್ಲಿ ಎಲ್ಲಿಯವರೆಗೆ ಹರಡಿದೆ ಎಂದು ಹೇಳಲು ಬರೊಲ್ಲ. ಮಾನವನ ಅತ್ಯಾಚಾರಗಳಿಂದ ಈ ರಾಡ್ ಗಳು ಕಟ್ಆದರೆ ಇದರ ಪರಿಣಾಮ ಆ ದೇಶ ಬಿಟ್ಟು ಬೇರೆ ದೇಶದಲ್ಲೂ ಆಗಬಹುದು.ನಮ್ಮ ಹಿಮಾಲಯ ಕುಸಿಯಲುಆ ಪ್ರದೇಶದ ಕೆಳಭಾಗದಲ್ಲಿ ನಡೆಯುವ ಅತ್ಯಾಚಾರ ಆಗಿರಬೇಕೆಂದಿಲ್ಲ.ಅದು ದೇಶದ ಯಾವುದೇ ಮೂಲೆಯಲ್ಲಿ ನಡೆದಿರಬಹುದು.ಅಥವಾ ವಿಶ್ವದ ಯಾವುದೇಮೂಲೆಯಲ್ಲಿ ಸಂಭವಿಸಿರಬಹುದು.ಏಕೆಂದರೆ ಅಲ್ಲಿ ವಿಶ್ವದಾದ್ಯಂತ ನೆಲದಡಿಯಲ್ಲಿ ಕಲ್ಲುಗಳು ಎಂಬ ರಾಡ್ ಹರಡಿರುತ್ತದೆ.ಆ ಸರಳು ರಾಡುಗಳು ಕಡಲಿನ ಅಡಿಯ ಯಲ್ಲೂ ಹರಡಿರುತ್ತದೆ.
ವಿಜ್ಞಾನಿಗಳು ಹೇಳುವಂತೆ ಕಡಲಿನ ಸಂಶೋಧನೆಬರೇ 5% ಮಾತ್ರ ಆಗಿರುವುದು.ಅವರು ಸಮುದ್ರದ ಸಂಶೋಧನೆಯನ್ನು ಕೈ ಬಿಟ್ಟು ಗೃಹಗಳ ಸಂಶೋಧನೆಏಕೆ ಮಾಡುತ್ತಿದ್ದಾರೆ?ಏಕೆಂದರೆ ಕಡಲು ನಿಗೂಢವಾಗಿಇದೆ.ನೆಲ ಭೂಮಿಯಲ್ಲಿನ ಎಲ್ಲಾ ಪ್ರಕೃತಿಯ ವಿಕೋಪಕ್ಕೆ ಸಮುದ್ರವೇ ಕಾರಣ.ಅದು ಹೋರಾಟ ಮಾಡುವುದು ತಾನು ಕಳೆದುಕೊಂಡ ಸಾಮ್ರಾಜ್ಯವನ್ನು ವಾಪಾಸ್ಪಡೆಯುದಕ್ಕಾಗಿ.ಅದೇ ಬದುಕು ಇರುವ ನೆಲ ಭೂಮಿಗಾಗಿ.ಆದರೆ ಈ ಕೆಲಸ ನೆಲ ಭೂಮಿಯಲ್ಲಿ ಪಾದೆ ಕಲ್ಲುಬಂಡೆಗಳು ಇರುವ ತನಕ ಸಾಧ್ಯವಿಲ್ಲ.ಕ್ರಮೇಣ ಈ ಕಲ್ಲು ಬಂಡೆಗಳಿಂದ ನಿರ್ಮಾಣವಾದ ಭೂಮಿ ಕುಸಿತ ಗಳು ಮುಂದುವರಿದರೆ ಕಡಲಿನ ಪ್ರಯತ್ನ ಫಲಿಸುತ್ತೆ.
ಭೂಮಿಯು ಜಲ ಭೂಮಿ ಮತ್ತು ನೆಲ ಭೂಮಿಯನ್ನು ಹೊಂದಿರುತ್ತದೆ.ಎರಡರಲ್ಲೂ ಬದುಕು ಇದೆ.71 ಭಾಗವು ಜಲಭೂಮಿ ಮತ್ತು 29 ಭಾಗವು ನೆಲಭೂಮಿಆಗಿದೆ.ಮುಂದಿನ ಯುಗಗಳಲ್ಲಿ ಈ ನೆಲಭೂಮಿ ಕಡಲಿ ನಲ್ಲಿ ವಿಲೀನವಾಗಬಹುದು.ಇಲ್ಲವೇ ಇನ್ನಷ್ಟು ನೆಲಭೂ ಮಿ ಸಮುದ್ರದಿಂದ ಮೇಲೆ ಬರಬಹುದು.ಪಾದೆ ಕಲ್ಲುಬಂಡೆಗಳು,ವಿವಿಧ ಖನಿಜಗಳು ನೆಲಭೂಮಿಯನ್ನುಕಡಲಿನ ಅಬ್ಬರದ ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸುವುದಲ್ಲದೆ ಸೂರ್ಯನ ಸುಡುವ ಉರಿ ಬಿಸಿಲಿನಿಂದ ರಕ್ಷಿಸುವ ಕೆಲಸ ಮಾಡುತ್ತದೆ.ಅಲ್ಲದೆ ಚಳಿಯನ್ನೂ ಹೀರಿ ರಕ್ಷಿಸುತ್ತದೆ.
ಐ.ಕೆ.ಗೋವಿಂದ ಭಂಡಾರಿ , ಕಾರ್ಕಳ.
(ನಿವೃತ್ತ ವಿಜಯಾಬ್ಯಾಂಕ್ ಮ್ಯಾನೆಜರ್)